ದೇಶಾಧಿಪತಿ ನರಹರಿಯೆ ನಿನ್ನಯ ಪಾದ ದಾಸರ ದಾಸನೆಂದೆನಿಸ / Deshadhipati narahariya ninnaya pada

ಕೃತಿಕಾರರು : ಶ್ರೀ ಕನಕದಾಸರು

ದೇಶಾಧಿಪತಿ ನರಹರಿಯೆ ನಿನ್ನಯ ಪಾದ |
ದಾಸರ ದಾಸನೆಂದೆನಿಸಬೇಕೆನ್ನ ||ಪ||

ರಜತಮೋಗುಣ ಪ್ರವರ್ತಕ ಮೂಲಾಂತರದಿಂ |
ಯಜಮಾನತನದಹಂಕಾರವನು ಒಲ್ಲೆ ||
ಭುಜ ಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜ |
ರಜ ಭಜಕರ ಭಜಕನೆಂದೆನಿಸೆನ್ನ ||೧||

ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ |
ತ್ತುರಿ ತಿಲಕವನಿಡುವುದ ನಾನೊಲ್ಲೆ ||
ಸಿರಿ ಊರ್ಧ್ವಪುಂಡ್ರ ದ್ವಾದಶನಾಮವಿಡುವವರ |
ಪರಿಚಾರಕರ ಪರಿಚಾರಕನೆನಿಸೆನ್ನ ||೨||

ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನು |
ಆದರದ ಅಮೃತಾನ್ನ ಉಣುವುದನೊಲ್ಲೆ |
ಬೋಧೆಯನು ಹೇಳುವ ಕೇಳುವ ಹರಿದಾಸರ |
ಪಾದತೀರ್ಥ ಪ್ರಸಾದವನುಣಿಸೆನ್ನ ||೩||

ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿ |
ಶೀಲರಹಿತ ಬ್ರಾಹ್ಮಣನಾಗಲೊಲ್ಲೆ ||
ಕೀಲನರಿತು ಹರಿಭಕುತಿಯನು ಮಾಳ್ಪ ಪರಮ ಚಾಂ |
ಡಾಲನ ಮನೆ ಬಾಗಿಲ ಕಾಯಿಸೆನ್ನ ||೪||

ಕ್ರೂರಶಾಸ್ತ್ರವನೋದಿ ಕುರಿ ಕೋಣವನೆ ಕಡಿದು |
ಘೋರ ನರಕದಿ ಬೀಳುವುದನು ನಾನೊಲ್ಲೆ ||
ವಾರಿಜಾಕ್ಷ ನಿನ್ನ ಚರಣ ಸೇವಕರ ಮನೆಯ |
ದ್ವಾರಪಾಲಕನೆಂದೆನಿಸೆನ್ನ ||೫||

ಪಟ್ಟೆಪಟ್ಟಾವಳಿ ದಿವ್ಯ ದುಕೂಲ ಮಿಂ |
ಚಿಟ್ಟ ವಸ್ತ್ರ ಉಡುವುದನೊಲ್ಲೆ ||
ನೆಟ್ಟನೆ ಕಾವಿ ಕಾಷಾಯಾಂಬರಗಳನು |
ಉಟ್ಟವರ ಬಂಟನೆಂದೆನಿಸೆನ್ನ ||೬||

ಅರ್ಥ ವಿಷಯಂಗಳ ಫಲಾಪೇಕ್ಷೆಯಿಂ ಪುಣ್ಯ |
ತೀರ್ಥಯಾತ್ರೆಯ ಮಾಡಲೊಲ್ಲೆ ||
ದೈತ್ಯಮರ್ದನ ಬಾಡದಾದಿಕೇಶವ ನಿನ್ನ |
ಕೀರ್ತನಗೈವರ ಸ್ತುತಿಕನೆನಿಸೆನ್ನ ||೭||

Lyrics in English

Deshadhipati Narahariye ninnaya pada |
Dasara dasanendenisabenna ||

Rajatamoguna pravartaka mulantaradim |
Yajamanatanadahankaravanu olle ||
Bhuja chakra dharisi sattvikara padambuja |
Raja bhajakara bhajakanendenisenna ||

Sirigandha kumkuma sadu javvaji ka |
Tthuri tilakavaniduvada nanolle ||
Siri urdhvapundra dvadashanamaviduvara |
Paricharakara paricharakanenisenna ||

Svadu kalpitavada bhakshya bhojyagalanu |
Adarada amritanna unuvudanolle |
Bodheyanu heluva keluva haridasara |
Padatirtha prasadavanunisenna ||

Kala karmadolupeksheya madi haribhakuti |
Shilarahita brahmananagalolle ||
Kilanaritu haribhakutiyanu malpa parama chan |
Dalana mane bagila kayisenna ||

Krurashastravanodi kuri konavane kadidu |
Ghora narakadi biluvudanu nanolle ||
Varijaksha ninna charana sevakara maneya |
Dvarapalakanendenisenna ||

Pattepattavali divya dukula mim |
Chitta vastra uduvudanolle ||
Nettane kavi kashayambaragalanu |
Uttavara bantanendenisenna ||

Artha vishayangala phalapeksheyim punya |
Tirthayatreya madalolle ||
Daityamardana Baadada Adikeshava ninna |
Kirtanagaivara stutikanenisenna ||

ಏಕೆ ಚಿಂತಿಸುತಿರುವೆ ಕೋತಿಮನವೆ / Eke Chintisutiruve Kotimanave

ಏಕೆ ಚಿಂತಿಸುತಿರುವೆ ಕೋತಿಮನವೆ |
ಶ್ರೀ ಕೃಷ್ಣರಾಯನನು ಸ್ತುತಿಸಲೊಲ್ಲದಲೆ ||ಪ||

ಹುಟ್ಟಿದಾಗುತ್ಪತ್ತಿಗಾರು ಚಿಂತಿಸಿದವರು |
ಕಟ್ಟಕಡೆಯಲಿ ಲಯಕೆ ಏನು ಚಿಂತೆ ||
ನಟ್ಟನಡುವಿನ ಬದುಕಿಗೇಕೆ ಚಿಂತಿಸುತಿರುವೆ |
ಕಟ್ಟಕಡೆಯಲಿ ಮೂರು ಬಟ್ಟೆ ತಾನಲ್ಲವೆ ||೧||

ನವಿಲಿಂಗೆ ಚಿತ್ರಪತ್ರವನಾರು ಬರೆದವರು |
ಪವಳಜಾತಿಗೆ ಕೆಂಪನಾರಿತ್ತರು ||
ಸವಿಮಾತಿನರಗಿಳಿಗೆ ಹಸಿರಾರು ಬರೆದವರು |
ಇವ ಮಾಡಿದವ ಕೃಷ್ಣ ನಮ್ಮ ಮರೆದಿಹನೆ ||೨||

ಬಸಿರೊಳಗೆ ಇದ್ದಾಗ ಶಿಶುವ ಹೊರೆದವರಾರು |
ವಸುಧೆಯನು ಬಸಿರೊಳಗೆ ಹೆತ್ತರಾರು ||
ವಸುದೇವಸುತ ನಮ್ಮ ಪುರಂದರವಿಠಲನ |
ಪೆಸರ ಬಸಿರೊಳಗಿಟ್ಟು ಸ್ತುತಿಸುತಿರು ಮನವೆ ||೩||

ಕೃತಿಕಾರರು : ಶ್ರೀ ಪುರಂದದಾಸರು

Lyrics in English

Eke Chintisutiruve Kotimanave

Eke chintisutiruve kotimanave |
Shri Krishnarayananu stutisalolladale ||

Huttidagutpattigaru chintisidavaru |
Kattakadeyali layake enu chinte ||
Nattanaduvina badukigeke chintisutiruve |
Kattakadeyali muru batte tanallave ||

Navilinge chitrapatravanaru baredavaru |
Pavalajatige kempanarittaru ||
Savimatinaragilige hasiraru baredavaru |
Iva madidava Krishna namma maredihane ||

Basirolage iddaga shishuva horedavararu |
Vasudheyanu basirolage hettararu ||
Vasudevasuta namma Purandaravithalana |
Pesara basirolagittu stutisutiru manave ||

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಳ ಗುಣ ಸದ್ಧಾಮ ಮಧ್ವನಾಮ ||ಪ||

ಆವ ಕಚ್ಚಪ ರೂಪದಿಂದ ಲಂಡೋದಕವ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಳಿವಿಡಿದು ಹರಿಯ ಸುರರೆಯ್ದುವರು
ಆ ವಾಯು ನಮ್ಮ ಕುಲಗುರುರಾಯನು ||1||

ಆವವನು ದೇಹದೊಳಗಿರಲು ಹರಿ ನೆಲಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದ ಒಳ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು ||2||

ಕರುಣಾಭಿಮಾನಿ ಸುರರು ದೇಹವ ಬಿಡಲು
ಕುರುಡ ಕಿವುಡ ಮೂಕನೆಂದೆನಿಸುವ
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣವೆಂದು ಪೇಳುವರು ಬುಧಜನ ||3||

ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ
ಪರತರನೆನಿಸಿ ನಿಯಾಮಿಸಿ ನೆಲಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರು ಕುಲತಿಲಕ ಮುಖ್ಯ ಪವಮಾನನು ||4||

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ
ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ
ಈತಗೆಣೆಯಾರು ಮೂರ್ಲೋಕದೊಳಗೆ ||5||

ತರಣಿಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿ
ಉರವಣಿಸಿ ಹಿಂದು ಮುಂದಾಗಿ ನಡೆದ
ಪರಮ ಪವಮಾನಸುತ ಉದಯಾಸ್ತ ಶೈಲಗಳ
ಭರದಿಯೈದಿದಗೀತಗುಪಮೆ ಉಂಟೇ ||6||

ಅಖಿಳ ವೇದಗಳ ಸಾರಪಠಿಸಿದನು ಮುನ್ನಲ್ಲಿ
ನಿಖಿಳ ವ್ಯಾಕರಣಗಳ ಇವ ಪಠಿಸಿದ
ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ ||7||

ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಳ ಕಂಡು ದನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು ||8||

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ
ಮೆರೆದ ಹನುಮಂತ ಬಲವಂತ ಧೀರ ||9||

ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿ ಕುಲತಿಲಕನಾಜ್ಞೆಯ ತಾಳಿದ
ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ
ಹರಿವರಗೆ ಸರಿಯುಂಟೆ ಹನುಮಂತಗೆ ||10||

ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜಭಕುತಿಯನೆ ಬೇಡಿ ವರವ ಪಡೆದ ||11||

ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮನಮ್ಮ ಕುಲಗುರು ರಾಯನು ||12||

ಕರದಿಂದಶಿಶುಭಾವನಾದ ಭೀಮನ ಬಿಡಲು
ಗಿರಿವಡೆದುಶತಶೃಂಗವೆಂದೆನಿಸಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ
ಅರೆವ ವೀರನಿಗೆ ಸುರ ನರರು ಸರಿಯೇ ||13||

ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ
ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ||14||

ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ
ನಿಲ್ಲದೊರಸಿದ ಲೋಕಕಂಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ||15||

ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯ ಯಾಗವನು ಮಾಡಿಸಿದನು
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ ||16||

ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ದಾನವರ ಸವರಬೇಕೆಂದು ಬ್ಯಾಗ
ಕಾನನವ ಪೊಕ್ಕು ಕಿಮ್ಮೀರಾದಿಗಳ ತರಿದು
ಮಾನಿನಿಗೆ ಸೌಗಂಧಿಕವನೆ ತಂದ ||17||

ದುರುಳ ಕೀಚಕನು ತಾಂ ದ್ರೌಪದಿಯ ಚಲುವಿಕೆಗೆ
ಮರುಳಾಗಿ ಕರೆಕರೆಯ ಮಾಡಲವನಾ
ಗರಡಿ ಮನೆಯಲ್ಲಿ ವರೆಸಿ ಅವನನ್ವಯದ
ಕುರುಪನಟ್ಟಿದ ಮಲ್ಲಕುಲವ ಸದೆದ ||18||

ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವನ ಮುರಿದು ಮೆರೆದ
ವೈರಿ ದುಶ್ಯಾಸನ್ನ ರಣದಲ್ಲಿ ಎಡೆಗೆಡಹಿ
ವೀರ ನರಹರಿಯ ಲೀಲೆಯ ತೋರಿದ ||19||

ಗುರುಸುತನು ಸಂಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ||20||

ಚಂಡ ವಿಕ್ರಮನು ಗದೆಗೊಂಡು ರಣದಿ ಭೂ
ಮಂಡಲದೊಳಿದಿರಾಂತ ಖಳರನೆಲ್ಲಾ
ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಂಡುನಿಲ್ಲುವರಾರು ತ್ರಿಭುವನದೊಳು ||21||

ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ ||22||

ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ವಮಾರ್ಗವನು
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ ||23||

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದಾ
ಶರ್ವಾದಿ ಗೀರ್ವಾಣ ಸಂತತಿಯಲಿ ||24||

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಳ ವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ಯ್ಯೆದಿದ ಮಧ್ವಮುನಿರಾಯಗಭಿವಂದಿಪೆ ||25||

ಜಯಜಯತು ದುರ್ವಾದಿಮತತಿಮಿರ ಮಾರ್ತಾಂಡ
ಜಯಜಯತು ವಾದಿಗಜ ಪಂಚಾನನ
ಜಯಜಯತು ಚಾರ್ವಾಕಗರ್ವಪರ್ವತ ಕುಲಿಶ
ಜಯ ಜಯ ಜಗನ್ನಾಥ ಮಧ್ವನಾಥ || 26 ||

ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ
ಭಂಗವಿಲ್ಲದೆ ಸುಖದ ಸುಜನಕೆಲ್ಲ
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ
ಶ್ರೀ ರಂಗ ವಿಠ್ಠಲನೆಂದು ನೆರೆ ಸಾರಿರೈ || 27 ||

ಮಧ್ವನಾಮ ಶ್ರೀ ಜಗನ್ನಾಥ ದಾಸರ ಫಲಶ್ರುತಿ

ಸೋಮ ಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತೀರದಿ
ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕು
ಈ ಮಧ್ವನಾಮ ಬರೆದೋದಿದರ್ಗೆ ||1||

ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ
ಶತ್ರುಗಳು ಕೆಡುವರಪಮೃತ್ಯು ಬರಲಂಜವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ ||2||

ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ
ತಾಪಕಳೆದಖಿಳ ಸೌಖ್ಯವನೀವುದು
ಶ್ರೀಪತಿ *ಜಗನ್ನಾಥವಿಠಲನ* ತೋರಿ ಭವ
ಕೂಪಾರದಿಂದ ಕಡೆ ಹಾಯಿಸುವುದು  ||3||

ಶೇಷಗಿರಿದೊರೆ ನಮ್ಮ ಶ್ರೀನಿವಾಸನ ಕಂಡೆ / sheshagiri namma shreenivasàna kande

ಶೇಷಗಿರಿದೊರೆ ನಮ್ಮ ಶ್ರೀನಿವಾಸನ ಕಂಡೆ |
ಕಂಡೆ ಶ್ರೀನಿವಾಸನ ॥ಪ॥

ಶ್ರೀನಿವಾಸನ ಕಂಡೆ ಶ್ರೀನಿವಾಸನ ಜ್ಞಾನಗುರು
ಮಧ್ವ ಮುನಿ ಮಾನುಷ ಹಂಸನ ಕಂಡೆ || ಅ. ಪ ||

ಗರುಡ ಶೇಷ ಗಿರಿಜಾ ರಮಣ ಸುರರೆಲ್ಲ,
ನಿರುತ ಸೇವಿಸುವ ಪಾದ
ಸರಸಿಜ ಯುಗಳವ ಕಂಡೆ ||೧||

ಮಾನಿನಿ ರಮಾದೇವಿ ವರ್ಣಿಸುತಲಿ,
ದಾನವಾಂತಕನ ಪಾದಜಾನು ಜಂಘೆಗಳನು ಕಂಡೆ||೨||

ಪರಮಾತ್ಮನ್ನ ಗುಣಗಳನ್ನುವರ್ಣಿಸುತಲೀ,
ಸಿರಿದೇವಿ ಇರುವ ವಕ್ಷ ಸ್ಥಳವನ್ನು ಕಣ್ಣಾರೆ ಕಂಡೆ||೩||

ವಾಸವಾಗರ್ಜುನನ ರಥದ ಮುಂದೆ ನಿಲ್ಲುವನ,
ಏಸು ಮಮತೆಯಿಂದ ಕುಣಿವ
ಹರಿಯ ಹಸ್ತಂಗಳ ಕಂಡೆ || ೪ ||

ಮಂದಗಮನ ಗೋಪಿ ಕಂದ ಬಾರೆಂದೆನ್ನಲು
ಮಂದಹಾಸದಿಂದ ನಗುವ ಸುಂದರ ವದನನ್ನ್ನ ಕಂಡೆ ||೫||

ಕುಕ್ಷಿಯೊಳಗೀರೇಳು ಜಗವ ರಕ್ಷಿಸುವನ,
ಪಕ್ಷಿಯ ಮೇಲೇರಿ ಬರುವ ಲಕ್ಷ್ಮೀರಮಣನ್ನಾ ಕಂಡೆ ||೬||

ಮಂಡೂಕಾರಿ ಪರ್ವತದಲ್ಲಿ ನೆಲೆಯಾಗಿಪ್ಪವನ,
ಪುಂಡರಿಕಾಕ್ಷ  ಶ್ರೀ ವೆಂಕಟವಿಠಲನ ಕಂಡೆ ||೭||

Lyrics in English

Sheshagiri namma shreenivasàna kande|
kande shreenivasàna||pa||

Shreenivasàna kande shreenivasàna jnanaguru
madhwa muni manusha hamsana kande ||a.pa||

Garuda shesha girija ramaana surarella |
niruta sevisuva pada sarasija yugalava kande||1||

Manini ramadevi varnissutali |
danavantakana padajanu janghegalanu kande ||2||

Paramatmanna gunagalannu varnissutali
siridevi iruva vaksha stalavannu kannare kande||3||

Vasavagarjunana rathada munde nilluvana
esu mamateyinda kuniva hariya hastangala kande ||4||

Mandagamana gopi kanda barendennalu
mandahasadinda naguva sundara vadananna kande  ||5||

Kukshiyolageerelu jagava rakshisuvana
pakshiya meleri baruva lakshmiramananna kande ||6||

Mandukari parvatadalli neleyagippavana
pundarikaaksha sree venkatavittalana kande ||7||

ಇದುವೇ ಪಂಡರಾಪುರ ವಿಠ್ಠಲ ಇದುವೇ / Iduve pandarapura vittala iduve

ಇದುವೇ ಪಂಡರಾಪುರ |
ವಿಠ್ಠಲ ಇದುವೇ ಪಂಡರಾಪುರ||
ಇದ ನಾ ಅರಿಯದೆ ಪೊದೆ ಮುಕುತಿಯ ಧಾಮ ||

ಪಾಪವ ತೊಳೆವ ಪಾವನ ಚಂದ್ರಭಾಗ | ತಾಪವ ಹರಿಸಿ ಶಾಂತಿಯ ನೀವ |
ಈ ವರ ಕ್ಷೇತ್ರ ಭೂವೈಕುಂಠ | ಭವ ಭಯ ಪರಿಹಾರ ವಿಠಲ||

ಪುಣ್ಯದ ದಿವಸ ಏಕಾದಶಿಯಿಂದು | ಹಾಡುತ ನಲಿಯುತ ಭಕುತರು ಬಂದು||
ನೋಡುವ ಭಾಗ್ಯ ಎನಗೆ ಇಂದು| ಕರುಣಿಸಿ ವರಗೈವೇ ವಿಠಲ ||

ಸಂತಾಳಜನಿಯು ಯೋಗಮಿಳನು| ಶ್ರೀ ತುಕರಾಮನು ಜ್ಞಾನೇಶ್ವರನು ||
ಪುಂಡಲೀಕನು ವಾಮದೇವನು | ಮೋಕ್ಷವನೆ ಪಡೆದ ವಿಠಲ ||

Lyrics in English

Iduve Pandharapura

Iduvē Paṇḍharāpura | Viṭhṭhala iduvē Paṇḍharāpura ||
Ida nā ariyade hōde mukutiya dhāma ||

Pāpava toḷeva pāvana Chandrabhāga | Tāpava harisi śhāntiya nīva |
Ī vara kṣhētra bhūvaikuṇṭha | Bhava bhaya parihāra Viṭhala ||

Puṇyada divasa ēkādaśhiyindu | Hāḍuta naliyuta bhakutaru bandu ||
Nōḍuva bhāgya enage indu | Karuṇisi varagaivē Viṭhala ||

Santāḷajaniyu Yōgamiḷanu | Śrī Tukarāmanu Jñānēśvaranu ||
Puṇḍalīkanu Vāmadēvanu | Mōkṣhavane paḍeda Viṭhala ||

ತಾಯಿ ಶಾರದೆ ಲೋಕಪೂಜಿತೆ / Taayi sharade loka poojite

ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಖಸ್ತುತೆ ||
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಖ್ಯದಾತೆ || ತಾಯಿ ಶಾರದೆ ||

ಅಂಧಕಾರವ ಓಡಿಸು
ಜ್ಞಾನಜ್ಯೋತಿಯ ಬೆಳಗಿಸು |
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು ಶಾಂತಿಯ ಉಳಿಸು ||

ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ |
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ, ನಮ್ಮ ಕೋರಿಕೆ ಆಲಿಸಮ್ಮ ||

ಒಳ್ಳೆ ಮಾತುಗಳಾಡಿಸು
ಒಳ್ಳೆ ಕೆಲಸವ ಮಾಡಿಸು |
ಒಳ್ಳೆ ದಾರಿಯಲೆಮ್ಮನಡೆಸು
ವಿದ್ಯೆಯ ಕಲಿಸು, ಆಸೆ ಪೂರೈಸು ||

Lyrics in English

Taayi Sharade Loka Poojite

Taayi Sharade loka poojite Jnaanadaate namostute ||
Premadindali salahu maate Needu sanmati soukhyadaate || Taayi Sharade ||

Andhakaarava oadisu Jnaanajyotiya belagisu |
Hridaya mandiradalli nelesu Chinteya alisu shaantiya ulisu ||

Ninna madilina makkalamma Ninna nambida kandaramma |
Ninna karuneya belakalemma Baalanu belagamma, namma korike aalisamma ||

Olle maatugalaadisu Olle kelasava maadisu |
Olle daariyalemmanadesu Vidyeya kalisu, aase pooreisu ||

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ / Enthu Ninna pooje Madi mecchisuveno

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ ||ಪ||

ಚಿಂತಾಯತನೆ ನಿನ್ನ ನಾಮ ಎನಗೊಂದು ಕೋಟಿ ||ಅ.ಪ||

ಪವಿತ್ರೋದಕದಿ ಪಾದ ತೊಳೆವೆನೆಂತೆಂದರೆ |
ಪಾವನೆಯಾದ ಗಂಗೆ ಪಾದೋದ್ಭವೆ ||
ನವಕುಸುಮವ ಸಮರ್ಪಿಸುವೆನೆಂದರೆ ಉದು |
ಭವಿಸಿಹನು ಅಜ ನಿನ್ನ ಪೊಕ್ಕುಳ ಹೂವಿನಲಿ ||೧||

ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತ |
ದ್ವೀಪಂಗಳೆಲ್ಲವನು ಬೆಳೆಗುತಿಹವೋ ||
ಆಪೋಶನವನಾದರೀವೆನೆಂತೆಂಬೆನೆ |
ಆಪೋಶನವಾಯ್ತು ಏಳು ಅಂಬುಧಿಯು ||೨||

ಕಾಣಿಕೆಯಿತ್ತಾದರೂ ಕೈ ಮುಗಿವೆನೆಂದರೆ |
ರಾಣಿವಾಸವು ಸಿರಿದೇವಿ ನಿನಗೆ ||
ಮಾಣದೆ ಮನದೊಳು ನಿನ್ನ ನಾಮಸ್ಮರಣೆ |
ಧ್ಯಾನವನು ದಯೆ ಮಾಡೋ ಪುರಂದರವಿಠಲ ||೩||

ಕೃತಿಕಾರರು : ಶ್ರೀ ಪುರಂದದಾಸರು

Entu Ninna Pooje Maadi Mecchuveno

Entu ninna pooje maadi mecchuveno || Pa ||

Chintaayatane ninna naama enagondu koti || A.pa ||

Pavitrodakadi paada toleventendare |
Paavaneyaada Gange paadodbhave ||
Navakusumava samarpisuvenendare
udbhavisihanu Aja ninna pokkula hoovinali || 1 ||

Deepavanu belaguvene ninna kangalu sapta |
Dweepangalellavanu belegutihavo ||
Aaposhanavanaadaareeve nentembene |
Aaposhanavaaytu elu ambudhiyu || 2 ||

Kaanikeyittaadaru kai mugivenedare |
Raanivaasavu Siridevi ninage ||
Maanade manadolu ninna naamasmarane |
Dhyaanavanu daye maado Purandara Vithala || 3 ||

ಶ್ರೀ ಸೂರ್ಯ ಕವಚ / ಸೂರ್ಯ ಸ್ತೋತ್ರ / ಆದಿತ್ಯ ಹೃದಯಂ

ಶ್ರೀ ಸೂರ್ಯ ಕವಚ – ಶ್ರೀಯಾಜ್ಞವಲ್ಕ್ಯ ಮುನಿ ವಿರಚಿತಂ

ಈ ಶ್ಲೋಕವನ್ನು ಪ್ರತಿದಿನ ಪಾರಾಯಣ ಮಾಡಬೇಕು. ಭಾನುವಾರ  ಪಾರಾಯಣ ಅತ್ಯಂತ ವಿಶೇಷ
 

ಶ್ರೀ ಹರಯೇನಮಃ 
ಶ್ರೀ ಯಾಜ್ಞವಲ್ಕ್ಯ  ಉವಾಚ 

ಶೃಣುಷ್ವ ಮುನಿ ಶಾರ್ದೂಲ ಸೂರ್ಯಸ್ಯ ಕವಚಂ ಶುಭಂ
ಶರೀರಾರೋಗ್ಯದಿಂ ದಿವ್ಯಂ ಸರ್ವ ಸೌಭಾಗ್ಯ ದಾಯಕಮ್ ॥1॥

ದೇದೀಪ್ಯಮಾನಮುಕುಟಂ ಸ್ಫೂರನ್ಮಕರಕುಂಡಲಂ
ಧ್ಯಾತ್ವಾ ಸಹಸ್ರ ಕಿರಣಂ ಸ್ತೋತ್ರಮೇತದುದೀರಯೇತ್ ॥2॥

ಶಿರೋ ಮೇ ಭಾಸ್ಕರಃ ಪಾತು ಲಲಾಟಂಮೇ ಮಿತದ್ಯುತಿಃ
ನೇತ್ರೇ ದಿನಮಣಿಃ ಪಾತು ಶ್ರವಣೇ ವಾಸರೇಶ್ವರಃ ॥3॥

ಘ್ರಾಣಂ ಘರ್ಮಘೃಣಿಃ ಪಾತು ವದನಂ ವೇದವಾಹನಃ
ಜಿಹ್ವಾಂ ಮೇ ಮಾನದಃ ಪಾತು ಕಂಠಂ ಮೇ ಸುರವಂದಿತಃ ॥4॥

ಸ್ತನೌ ಪ್ರಭಾಕರಃ ಪಾತು ವಕ್ಷಃ ಪಾತು ಜನಪ್ರಿಯಃ |
ಪಾತು ಪಾದೌ ದ್ವಾದಶಾತ್ಮ | ಸರ್ವಾಜ್ಞಂ ಸಕಲೇಶ್ವರಃ ॥5॥

ಸೂರ್ಯ ರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೇ
ದದಾತಿ ಯಃ ಕರೇತಸ್ಯ ವಶಗಾಃ ಸರ್ವ ಸಿದ್ಧಯಃ ॥6॥

ಸುಸ್ಮಾತೋ ಯೋ ಜಪೇತ್ಸಮ್ಯ ಗ್ಯೋಧೀತೇ ಸ್ವಸ್ಥಮಾನಸಃ
ಸರೋಗ ಮುಕ್ತೋ ದೀರ್ಘಾಯು ಸುಖಂ ಪುಷ್ಠಂ ಚ ವಿಂದತಿ ॥7॥

ಇತಿ  ಶ್ರೀ ಯಾಜ್ಞವಲ್ಕ್ಯ ಮುನಿ ವಿರಚಿತಮ್ ಶ್ರೀ ಸೂರ್ಯ  ಕವಚ ಸ್ತೋತ್ರಮ್  ಸಂಪೂರ್ಣಂ

************************************************************************

ಸೂರ್ಯ ಸ್ತೋತ್ರ


ಸೂರ್ಯಾಯ ವಿಷ್ಣುರೂಪಾಯ ಲೋಕನೇತ್ರಾಯ ಭಾನವೇ |
ಸಪ್ತಾಶ್ವಾಯ ಚ ಕಾಲಾಯ ಪ್ರಭಾಕರಾಯ ತೇ ನಮ: ||

ವಿವಸ್ವತೇಸ್ರುಣಪೂರ್ವಾಯ ರವಯೇಸ್ಮಿತ ತೇಜಸೇ |
ಸವಿತ್ರೇಸ್ಕ್ರಾಯ ಭರ್ಗಾಯ ದೀಪ್ತಿಮೂಲಾಯ ತೇ ನಮ: ||

ಅಂಶುಮತೇ ತಮೋಹರ್ತ್ರೇ ಮನುಪಿತ್ರೇ ಚ ಧೀಮತೇ |
ಮಹತೇ‌ ಭಾಸ್ವತೇ‌ ಹೋತ್ರೇ ನಭಸ್ವತೇ ನಮೋ ನಮ: ||

ಮಹಾವೈದ್ಯಾಯ ಬ್ರಧ್ನಾಯಾ ನ್ನಮೂಲಾಯ ಯಶಸ್ವಿನೇ‌ |
ಆರೋಗ್ಯಾಯ ಚ ದಿವ್ಯಾಯ ಪ್ರತ್ಯಕ್ಷಾಯ ನಮೋ ನಮ: ||

ಸೂರ್ಯಾಯ ವಿಷ್ಣು ರೂಪಾಯ ಲೋಕನೇತ್ರಾಯ ಭಾನವೇ |
ಸಪ್ತಾಶ್ವಾಯ ಚ ಕಾಲಾಯ ಪ್ರಭಾಕರಾಯ ತೇ ನಮ: ||

ವಿವಸ್ವತೇಸ್ರುಣಪೂರ್ವಾಯ ರವಯೇಸ್ಮಿತ ತೇಜಸೇ |
ಸವಿತ್ರೇಸ್ಕ್ರಾಯ ಭರ್ಗಾಯ ದೀಪ್ತಿಮೂಲಾಯ ತೇ ನಮ:

ಅಂಶುಮತೇ ತಮೋಹರ್ತ್ರೇ ಮನುಪಿತ್ರೇ ಚ ಧೀಮತೇ |
ಮಹತೇ‌ ಭಾಸ್ವತೇ‌ ಹೋತ್ರೇ ನಭಸ್ವತೇ ನಮೋ ನಮ: ||

ಮಹಾ ವೈದ್ಯಾಯ ಬ್ರಧ್ನಾಯಾ ನ್ನಮೂಲಾಯ ಯಶಸ್ವಿನೇ‌ |
ಆರೋಗ್ಯಾಯ ಚ ದಿವ್ಯಾಯ ಪ್ರತ್ಯಕ್ಷಾಯ ನಮೋ ನಮ: ||

ಆದಿತ್ಯಸ್ಯ ನಮಸ್ಕಾರನ್ ಯೇ ಕುರ್ವಂತಿ ದಿನೇ ದಿನೇ |
ಜನ್ಮಾಂತರಸಹಸ್ರೇಷು ದಾರಿದ್ರ್ಯಂ ದೋಷ ನಾಶತೇ |

ಅಕಾಲಮೃತ್ಯು ಹರಣಂ ಸರ್ವವ್ಯಾಧಿ ವಿನಾಶನಮ್ |
ಸೂರ್ಯ ಪಾದೋದಕಂ ತೀರ್ಥಂ ಜಠರೇ ಧಾರಯಾಮ್ಯಹಮ್ ||

ಯೋಗೇನ ಚಿತ್ತಸ್ಯ ಪದೇನ ವಾಚಾ
ಮಲಂ ಶರೀರಸ್ಯ ಚ ವೈದ್ಯಕೇನ |
ಯೋಪಾಕರೋತ್ತಂ ಪ್ರವರಂ ಮುನೀನಾಂ
ಪತಂಜಲಿಂ ಪ್ರಾಂಜಲಿರಾನತೋsಸ್ಮಿ ||

ಸೂರ್ಯಂ ಸುಂದರಂ ಲೋಕನಾಥಮಮೃತಂ ವೇದಾಂತ ಸಾರಂ ಶಿವಂ
ಜ್ಞಾನಂ ಬ್ರಹ್ಮಮಯಂ ಸುರೇಶಮಮಲಂ ಲೋಕೈಕ ಚಿತ್ತ ಸ್ವಯಂ
ಇಂದ್ರಾದಿತ್ಯನರಾಧಿಪಂ ಸುರಗುರುಂ ತ್ರೈಲೋಕ ಚೂಡಾಮಣೇ
ಬ್ರಹ್ಮವಿಷ್ಣು ಶಿವ ಸ್ವರೂಪ ಹೃದಯಂ ವಂದೇ ಸದಾ ಭಾಸ್ಕರಂ ll

ಸುದರ್ಶನ ಮಹಾಜಾಲ ಕೋಟಿಸೂರ್ಯ ಸಮಪ್ರಭಾ
ನಾರಸಿಂಹೋ ಮಹಾಸಿಂಹೋ ದಿವ್ಯಸಿಂಹೋ ನಮೋಸ್ತುತೇ

ನಮೋಸ್ತು ಸೂರ್ಯಾಯ ಸಹಸ್ರ ರಶ್ಮಿಯೇ ಸಹಸ್ರ ಶಾಖಾನ್ವಿತ
ಸಂಭವಾತ್ಮನೇ ಓಂ ನಮೋ ಸೂರ್ಯ ದೇವಾಯ ನಮಃ ll

ನಿತ್ಯಾಯ ನಿರವದ್ಯಾಯ ನಿರ್ಮಲಜ್ಞಾನಮೂರ್ತಯೇ

ನಿಗಮಾರ್ಥಪ್ರಕಾಶಾಯ ಭಾಸ್ಕರಾಯ ನಮೋ ನಮ:

ಆದಿಮಧ್ಯಾಂತಶೂನ್ಯಾಯ ವೇದವೇದಾಂತವೇದಿನೇ
ನಾದಬಿಂದುಸ್ವರೂಪಾಯ ಭಾಸ್ಕರಾಯ ನಮೋ ನಮ:

ನಿರ್ಮಲಜ್ಞಾನರೂಪಾಯ ರಮ್ಯತೇಜ:ಸ್ವರೂಪಿಣೇ
ಬ್ರಹ್ಮತೇಜಸ್ಸ್ವರೂಪಾಯ ಭಾಸ್ಕರಾಯ ನಮೋ ನಮ:

ಓಂ ನಮಃ ಸೂರ್ಯಾಯ ಶಾಂತಾಯಾ ಸರ್ವ ರೋಗ ನಿವಾರಿಣೆ
ಆಯುರಾರೋಗ್ಯ ಮ ಐಶ್ವರ್ಯ ಮ ದೇಹಿ ದೇವಾ ಜಗತ್ಪತೇ ll

************************************************************************

ಆದಿತ್ಯ ಹೃದಯಂ


ಧ್ಯಾನಂ
ನಮಸ್ಸವಿತ್ರೇ ಜಗದೇಕ ಚಕ್ಷುಸೇ ಜಗತ್ಪ್ರಸೂತಿ ಸ್ಥಿತಿ ನಾಶಹೇತವೇ
ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ ವಿರಿಂಚಿ ನಾರಾಯಣ ಶಂಕರಾತ್ಮನೇ

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾಸ್ಥಿತಮ್ ।
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ ॥ 1 ॥

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ ।
ಉಪಾಗಮ್ಯಾಬ್ರವೀದ್ರಾಮಂ ಅಗಸ್ತ್ಯೋ ಭಗವಾನ್ ಋಷಿಃ ॥ 2 ॥

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ ।
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ ॥ 3 ॥

ಆದಿತ್ಯಹೃದಯಂ ಪುಣ್ಯಂ ಸರ್ವಶತ್ರು-ವಿನಾಶನಮ್ ।
ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಮ್ ॥ 4 ॥

ಸರ್ವಮಂಗಳ-ಮಾಂಗಳ್ಯಂ ಸರ್ವಪಾಪ-ಪ್ರಣಾಶನಮ್ ।
ಚಿಂತಾಶೋಕ-ಪ್ರಶಮನಂ ಆಯುರ್ವರ್ಧನಮುತ್ತಮಮ್ ॥ 5 ॥

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ ।
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ ॥ 6 ॥

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ ।
ಏಷ ದೇವಾಸುರ-ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ ॥ 7 ॥

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ ।
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ ॥ 8 ॥

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ ।
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ ॥ 9 ॥

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ ।
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ ॥ 10 ॥

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್ ।
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋಂಽಶುಮಾನ್ ॥ 11 ॥

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ ।
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ ॥ 12 ॥

ವ್ಯೋಮನಾಥ-ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ ।
ಘನಾವೃಷ್ಟಿರಪಾಂ ಮಿತ್ರಃ ವಿಂಧ್ಯವೀಥೀ ಪ್ಲವಂಗಮಃ ॥ 13 ॥

ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ ।
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ ॥ 14 ॥

ನಕ್ಷತ್ರ ಗ್ರಹ ತಾರಾಣಾಂ ಅಧಿಪೋ ವಿಶ್ವಭಾವನಃ ।
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮ-ನ್ನಮೋಽಸ್ತು ತೇ ॥ 15 ॥

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ ।
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ ॥ 16 ॥

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ ।
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ॥ 17 ॥

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ ।
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ ॥ 18 ॥

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ ।
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ॥ 19 ॥

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ ।
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ ॥ 20 ॥

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ ।
ನಮಸ್ತಮೋಽಭಿ ನಿಘ್ನಾಯ ರವಯೇ ಲೋಕಸಾಕ್ಷಿಣೇ ॥ 21 ॥

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ ।
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ ॥ 22 ॥

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ ।
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ ॥ 23 ॥

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ ।
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ ॥ 24 ॥

ಫಲಶ್ರುತಿಃ

ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ ।
ಕೀರ್ತಯನ್ ಪುರುಷಃ ಕಶ್ಚಿನ್ನಾವಶೀದತಿ ರಾಘವ ॥ 25 ॥

ಪೂಜಯಸ್ವೈನ ಮೇಕಾಗ್ರಃ ದೇವದೇವಂ ಜಗತ್ಪತಿಮ್ ।
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ ॥ 26 ॥

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ ।
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ ॥ 27 ॥

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋಽಭವತ್ತದಾ ।
ಧಾರಯಾಮಾಸ ಸುಪ್ರೀತಃ ರಾಘವಃ ಪ್ರಯತಾತ್ಮವಾನ್ ॥ 28 ॥

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ ।
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ॥ 29 ॥

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ ।
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಽಭವತ್ ॥ 30 ॥

ಅಧ ರವಿರವದನ್ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ ।
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ ॥ 31 ॥

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮಿಕೀಯೇ ಆದಿಕಾವ್ಯೇ ಯುದ್ಧಕಾಂಡೇ ಪಂಚಾಧಿಕ ಶತತಮಃ ಸರ್ಗಃ ॥

ಬಂಧು ತ್ರಿಜಗಕೆ ಶ್ರೀ ಹರಿಯಲ್ಲದೆ ಮಿಕ್ಕ / Bandhu trijagake Shree hariyallade mikka

ಬಂಧು ತ್ರಿಜಗಕೆ ಶ್ರೀ ಹರಿಯಲ್ಲದೆ ಮಿಕ್ಕ
ಬಂಧುಗಳದಾರಿಗಾರಿದ್ದರೇನು                                             ।।ಪ।।

ನೆಗಳ ಕೈಯಲ್ಲಿ ಮಾತಂಗವು ಸಿಕ್ಕಿ ಒದರಲಾಗಿ ಆ
ನೆಗಳೇನ ಮಾಡುತಿರ್ದವಡವಿಯಲ್ಲಿ
ನಗಜೆಯಾಳ್ದನ ಬ್ರಹ್ಮೇತಿ ಬಂದು ಕಡಲಾಗಿ ರುದ್ರಾ
ದಿಗಳೇನ ಮಾಡುತಿರ್ದರಾ ಶೈಲದೊಳಗೆ                              ।।೧।।

ದಿಂಡೆಯ ಮಾರ್ಗದಿ ಮಲತಾಯಿ ಮಗನ ಹೊಡೆಯಲು
ಮಂಡಲಪತಿ ಏನ ಮಾಡುತಿರ್ದನು
ಮಿಂಡಿ ಪೆಣ್ಣನು ಸಭೆಯಲಿ ಸೀರೆ ಸುಲಿಯಲು
ಗಂಡರೈವರು ನೋಡಿ ಏನು ಮಾಡುತಿರ್ದರಯ್ಯ                    ।।೨।।

ಮೃಗ ಚಕ್ರವರ್ತಿ ಬಹುವರನಾಗಿ ಪೋಗುತ್ತಿರೆ
ಮಿಗೆ ಸತಿಸುತರೇನ ಮಾಡುತಿರ್ದರು
ಮೃಗ ಮಾನವಾಕಾರ ಕಾಗಿನೆಲೆಯಾದಿಕೇಶವನಲ್ಲದೆ
ಮಿಗು ಬಂಧುಗಳದಾರಿಗಾರಿದ್ದರೇನು                                    ।।೩।।

Lyrics in English

Bandhu trijagake Sri hariyallade mikka
bandhugaladarigariddarenu || pa ||

Negala kaiyalli maatangavu sikki odaralaagi aa
Negalena maadutirda vadaviyalli
Nagajeyaldana Brahmeti bandu kadalaagi Rudra
Digalena maadutirdara shailadolage || 1 ||

Dindeya margadi malataayi magan hodeyalu
Mandalapati ena maadutirdanu
Mindi pennanu sabheyalli seere suliyalu
Gandarivaru nodi enu maadutirdarayya || 2 ||

Mruga chakravarti bahuvaranaagi poguttire
Miga satisutarenna maadutirdaru
Mruga maanavaakaara kaaginileyadikeshavanallade
Migu bandhugaladaarigaariddarenu || 3 ||


Video is not available at this moment.

ಎಷ್ಟು ಬಾರಿ  ಮೊರೆ ಇಡಲಿ ಶಂಭೋ / Eshtu bari more idali shambha shankara

ಎಷ್ಟು ಬಾರಿ  ಮೊರೆ ಇಡಲಿ
ಶಂಭೋ ಶಂಕರಾ
ಕಷ್ಟಗಳ ನೀಗಿಸು ಬಾ ಹೇ ಮಹೇಶ್ವರ  ||ಎಷ್ಟು ||

ಅಜ್ಞಾನದ ಅಂಧಕಾರ ಮನಕೆ ಸುತ್ತಿದೆ
ಮುಂದೆ  ದಾರಿ ಕಾಣದಿದೆ
ಭಯವು ಮುತ್ತಿದೆ
ಪಾಪಗಳ ಹೊರೆಯನ್ನು ಹೊರಲಾರದೇ
ಭವಬಂಧದ ಜಾಲದಿಂದ ಬರಲಾರದೆ
ತತ್ತರಿಸಿದೆ ನೊಂದು ಬೆಂದು ನಿಂದಿರುವೆನು
ನಿನ್ನೊಲವಿನ ಸುದೆ ಹರಿಸಿ
ಕಾಪಾಡು ಬಂದೂ      ||ಎಷ್ಟು ||

ಪಶ್ಚಾತ್ತಾಪ ಎಂಬ ಬೆಂಕಿ ಸುಡುತಿದೆ ನನ್ನಾ
ಮಲಿನ ಕಳೆದು ಆಗಲಿ
ಮನ ಪುಟವಿಟ್ಟ ಚಿನ್ನ
ಕಂಬನಿಯಲಿ ಪಾದ ತೊಳೆವ
ಆಸೆ ಆಗಿದೆ
ನಿಂತಿರುವೆ ಮೌನದಲ್ಲಿ ಮಾತು ಬಾರದೆ
ಕರುಣಿಸಿ ಪ್ರಭು ನೀ
ಮನ ನೆಮ್ಮದಿ ತಾರಾಾ
ಕೈ ಹಿಡಿದು ನಡೆಸೆನ್ನಾ ಹೇ ದೀನ ಬಂಧು    ||ಎಷ್ಟು ||

ಆತ್ಮವೆಂಬ ಪ್ರಣವದಿಂದ ಆರಾಧಿಸುವೆ
ವಿಶ್ವಾಸದಿ ನಿಶ್ವಾಸದಿ ಕೀರ್ತಿ ಹಾಡುವೆ
ಪ್ರಾಣ ಜ್ಯೋತಿ  ದೀಪದಿಂದ ಆರತಿ ಗೈವೆ
ಭಕ್ತಿ  ಕುಸುಮ ತವ ಪಾದಕೆ ಅರ್ಚನೆಗೈವೆ
ಮುಕ್ತಿದಾರಿ ತೋರೋ
ಹೇ ಕರುಣಾಮಯನೆ
ತವ ಪಾದ ಪೂಜೆ ನೀಡು ಪಾವನಾಂಗನೇ    ||ಎಷ್ಟು ||

Lyrics in English

Eshtu bari more idali
shambha shankara
kashtagala neegisu baa he maheshwara ||Eshtu ||

Ajnanada andhakara manake suttide
munde daari kaanadide bhayavu muttide
papagala horeyannu horalarade
bhavabandhana jaladinda baralarade
ninnolavina sude harisi kapadu bandu || eshtu bari ||

Paahchattapa emba benki sudutide nanna
malina kaledu agali mana putavitta chinna ||
kambaniyali pada toleva aase agide ||
nintiruve mounadalli maatu barade karunisi
prabhu nee mana nemmadi taara kai hididu
nadesenna he deena bandhu || eshtu baari ||

Aatmavemba pranavadinda aradhisuve
vishwasadi nishwasadi keerti haduve
prana jyoti deepadinda aarati gaive
bhakti kusuma tava padake archane gaive
muktidari toro he karunamayane
tava pada pooje needu pavanangane || eshtu baari ||