ಈ ತನುವು ನಿನ್ನಾ ಗುಡಿ ಪರಶಿವನೆ ಈ ಮನವು ನಿನ್ನಾ ನೆಲೆ ||ಈ ತನುವು||
ನನ್ನುಸಿರ ಕಣಕಣಗಳು ಶಿವ ನಿನ್ನ ನಾಮವನೆ ಕಣವರಿಸಿದೆ ಜಯ ಜಯತು ಜಗಧೀಶ್ವರ ಪಾಹಿಮಾಂ ಜಯ ಜಯತು ಗಂಗಾಧರ ||ಈ ತನುವು||
ನೀ ಸೂತ್ರಧಾರಿ ನಾ ಪಾತ್ರಧಾರಿ ನಿನ್ನಿಚ್ಛೆ ನಾ ಅರಿಯೆನು ನನ್ನಾತ್ಮ ಜ್ಯೋತಿ ಶಿವ ನೀನೆ ಎಂದು ನಿನ್ನನ್ನೆ ನಂಬಿರುವೆನು ಹೆತ್ತವಳ ಮನಸ್ಸು ಕಲ್ಲಾಗಿ ಹೋಯಿತೆ ಶಂಕರಿಯೆ ಹೇಳು ಇದು ನ್ಯಾಯವೆ ಸಿರಿತನವು ಬೇಡ ದೊರೆತನವು ಬೇಡ ಸದ್ಗತಿಯು ನನಗಾಗಲಿ ನನ್ನಾತ್ಮ ಶಿವಲೀಲೆಯನು ಹಾಡಲಿ ಜಯ ಜಯತು ಜಗಧೀಶ್ವರ ಪಾಹಿಮಾಂ ಜಯ ಜಯತು ಗಂಗಾಧರ
ಶಿವನಿತ್ತ ಜೀವ ಶಿವನಿಗರ್ಪಿಸಿದ ಧನ್ಯತೆಯು ನನಗಾಗಲಿ ನನ್ನ ತನುಮನವು ರೋಮ ರೋಮಗಳು ನಿನ್ನ ರೂಪವ ನೆನೆಯಲಿ ಮಂಗಳೆಯೆ ನಿನ್ನ ಮುನಿಸು ಕರಗಿರಲಿ ಸತ್ಯಕ್ಕೆ ನ್ಯಾಯಕ್ಕೆ ಜಯ ದೊರಕಲಿ ಶರಣರಿಗೆ ವಿಜಯ ಭಕುತರಿಗೆ ಅಭಯ ಇದು ತಾನೆ ನಿಜ ನೀತಿಯು ಭಕ್ತಿಯು ಪರಶಿವಗೆ ಬಲು ಪ್ರೀತಿಯು ಜಯ ಜಯತು ಜಗಧೀಶ್ವರ ಪಾಹಿಮಾಂ ಜಯ ಜಯತು ಗಂಗಾಧರ ||ಈ ತನುವು|| ಸತ್ಯಂ ಶಿವಂ ಸುಂದರಂ||5||
Lyrics in English
Ee tanuvu ninna gudi parashivane ee manavu ninna nele ||
ನೋಡಿದೆನು ಗುರುಗಳ ಪಾದಾಬ್ಜವ ಪಾಡಿದೆನು ಸನ್ಮಹಿಮೆಗಳ ನಾ ಬೇಡಿದೆನು ಮನದಣಿಯೆ ವರಗಳ ಈಡು ಇಲ್ಲದೆ ಕೊಡುವ ಪ್ರಭುಗಳ ||ಪ.ಆ||
ಪಂಚಕೃಷ್ಣಾರಣ್ಯ ಕ್ಷೇತ್ರ ಪಿನಾಕಿನಿಯ ತೀರದಲ್ಲಿ ನಿಂತು ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು|| ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ|| ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ ||೧||
ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು | ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ ||
ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ | ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ ||
ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು | ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು ಅರಮನೆಯ ಮಾಡಿಕೊಂಡು ಮರುಳು ಮಾಡಿದ ಮಾಯಾವಿಗೆ ||
ಇಂಥಾ ಗುರುಗಳ ಕಾಣೆನಾ… ಭೂತಳದೊಳು ಇಂಥಾ ಯತಿಗಳ ಕಾಣೆನಾ… ||ಇಂಥಾ||
ಇಂಥ ಗುರುಗಳ ಕಾಣೆ ಮಂತ್ರ ಮಂದಿರದಲ್ಲಿ ನಿಂತು ಭಜಕರಿಗೆ ಚಿಂತೆ ಕಳೆವ ಕರುಣಿ ||ಇಂಥಾ||
ದೇವಸ್ವಭಾವನೀತನು ಸತತ ಪವನ ದೇವನಾವೇಶಯುಕ್ತನೂ ||ದೇವ|| ಆವ ಸಂಶಯವ್ಯಾಕೆ ದೇವಾಧಿದೇವ ನರಮೃಗ ದೇವನೀತನ ಭಕ್ತಿಗೆ ಧಾವಿಸಿ ಬಂದ ಸ್ತಂಭದಿ ಭಾವ ಭಕ್ತಿಯಲಿ ಸೇವಿಪರಿಗೆ ಭವ ನೋವು ಕಳೆದು ಸುರ ಗೋವಿನ ತೆರ ವರ ವೀವನು ಕರುಣದಿ ಕಾವನು ಪರಮ ಪಾವನ ಚರಿತನು ಕೋವಿದರೊಡೆಯನು ||ಇಂಥಾ||
ವರಹಜ ತಟದಲ್ಲಿರುವ ಭಕ್ತರು ಕೂಗಿ ಕರೆದಲ್ಲಿಗೋಡಿ ಬರುವ ||ವರಹಜ|| ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯ ಪರಿಮಳ ಗ್ರಂಥವ ವಿರಚಿಸಿ ಬುಧರಿಗೆ ಗರೆದನು ಕರುಣದಿ ಪೊರೆದನು ಪರಮತ ಮುರಿದನು ಜಗದೋಳ್ ಮೆರೆದನು ಹೊಸ ಹೊಸ ಪರಿ ಸುಮಹೋತ್ಸವ ಹರುಷದಿ ಪ್ರತಿದಿನ ಗುರು ಸುಯಮೀಂದ್ರರ ಕರದಿಂಗೊಂಬರು ||ಇಂಥಾ||
ಮಂದಜಾಸನ ಜನಕ ಶ್ರೀ ಶಾಮಸುಂದರನಂಘ್ರಿ ಸೇವಕ ||ಮಂದ|| ಕಂದರ್ಪಶರಕರಿ ವೃಂದ ಕೇಸರಿ ಎನಿಸಿ ಗಂಧವಾಹನ ಮತ ಸಿಂಧುವಿಗೆ ಶಶಿಯಂದದಿ ರಾಜಿಸಿ ವೃಂದಾವನವನು ಒಂದೆ ಮನದಲಿ ವಂದಿಸಿ ನಮಿಸುವ ವಂದ್ಯಾಂಧಕರಿಗೆ ಕಂದರಕ್ಷಿಗಳ ಕುಂದದಿ ಕೊಡುವ ಕರ್ಮಂದಿ ಕುಲಾಗ್ರಣಿ ||ಇಂಧಾ||
ಮೂರು ನಾಮಂಗಳ ಧರಿಸಿದ ದಾಸರು ವೀರ ಮಾರುತಿ ಮತದವರು ಸಾರುತ್ತ ಬೊಮ್ಮಾದಿ ಸುರರುಗಳನ್ನು ತಾರತಮ್ಯದಿಂದ ತಿಳಿದು ಬಾರಿಬಾರಿಗೆ ನಿಮ್ಮ ಹಾರೈಸಿ ಆನಂದ ವಾರಿಧಿಯಲಿ ಮಗ್ನರಾಗಿ ತಾರರು ಮನಸಿಗೆ ಮುರಡು ದೇವತೆಗಳ ಸಾರ ಹೃದಯರು ನಿಂದಿಹರು ||5||
ಅಂದು ಬಲೀಂದ್ರನ್ನ ದ್ವಾರದಿ ನೀನಿರೆ ಮಂದಮತಿಯು ರಾವಣನು ಬಂದು ಕೆಣಕೆ ನಗುತ ಮಹಾಲೀಲೆ ಯಿಂದಲಿ ನೀನಾ ಖಳನ ಒಂದು ಶತಯೋಜನ ತಡಮಾಡದಲೆ ನೀ ಹಿಂದಕ್ಕೆ ಬೆರಳಲ್ಲಿ ಒಗೆದೆ ಇಂದು ನಿನಗೆ ಈ ರಥವ ನಡೆಸುವುದು ಅಂದವಾಗಿಹುದೇನೊ ದೇವ||6||
ಬಂಗಾರ ರಥದೊಳು ಶೃಂಗಾರವಾದ ಶ್ರೀ ಮಂಗಳಾಂಗ ಕಳಿಂಗ ಭಂಗ ನರಸಿಂಗÀ ಅಂಗಜ ಜನಕ ಸಾ- ರಂಗ ರಥಾಂಗ ಪಾಣಿ ಸಂಗ ನಿಸ್ಸಂಗ ಮಾತಂಗ ವಿಹಂಗ ಪ್ಲ- ವಂಗ ನಾಯಕ ಪರಿಪಾಲ ಸಂಗೀತ ಲೋಲ ಗೋಪಾಂಗನೆಯರ ಅಂತ- ರಂಗ ಸಂತಾಪ ವಿದೂರ ||7||
ಹತ್ತು ಗೋದಾನಕೆ ಸಮ, ಹರಿಗೆ ವೃಷಭ ದಾನ ಹತ್ತು ವೃಷಭಕೆ ಸಮ, ಹಾರುವ ಕುದುರೆಕಾಣಿರೊ ಹತ್ತು ಕುದುರೆಗೆ ಸಮ, ಹಸ್ತಿದಾನಕಾಣಿರೊ ಹತ್ತು ಹಸ್ತಿಗೆ ಸಮ, ಒಂದು ಕ್ರತು ಹತ್ತು ಕ್ರತುವಿಗೆ ಸಮ, ಹರಿಭಕ್ತರಿಗೆ ಕನ್ಯಾದಾನಕಾಣಿರೊ ಹತ್ತು ಕನ್ಯಾದಾನಕೆ ಸಮ, ಹಸಿದವಗೆ ಅನ್ನದಾನಕಾಣಿರೊ ಹತ್ತು ಅನ್ನದಾನಕೆ ಸಮ, ಉದಕದಾನಕಾಣಿರೊ ನಿತ್ಯ ಪುರಂದರವಿಠಲನ ನೆನೆವ ಪುಣ್ಯಕೆಣೆಯಿಲ್ಲ ಎಣೆಯಿಲ್ಲಕಾಣಿರೊ ||