ನೀರೊಳು ಮುಳುಗಿದೆ ಏನೋ ನಿನಗೆ ನೆಗಡಿಯಾಯಿತೇನೋ । ಭಾರವ ಪೊತ್ತು ನಿನ್ನ ಬೆನ್ನು ನೊಂದಾವೇನೋ ॥ ಧಾರುಣಿ ಬಗೆದು ನಿನ್ನ ದಾಡಿ ನೊಂದಾವೇನೋ । ದುರುಳ ಹಿರಣ್ಯಕನ ಬಗೆದು ಬೆರಳು ನೊಂದಾವೇನೋ ॥ ೧ ॥
ಭೂಮಿಯ ಅಳೆದು ನಿನ್ನ ಪಾದ ನೊಂದಾವೇನೋ । ರಾಯರಾಯರ ಗೆದ್ದು ಬಾಹು ನೊಂದಾವೇನೋ ॥ ಸೇತುವೆ ಕಟ್ಟಿ ನಿನ್ನ ರಟ್ಟೆ ನೊಂದಾವೇನೋ । ಅಷ್ಟಮ ಸ್ತ್ರೀಯರನ್ನಾಳಿ ತೋಳು ನೊಂದಾವೇನೋ ॥ ೨ ॥
ಬತ್ತಲೆ ನಿಂದು ನಿನಗೆ ಚಳಿಯಾಯಿತೇನೋ । ಉತ್ತಮ ತೇಜಿಯನೇರಿ ಪಿತ್ತ ಹತ್ತಿತೇನೋ ॥ ನಾರದ ಗುರುವಿಗೆ ನಾನು ಹೇಳಿ ಕಳಿಸಲೇನೋ । ಮಾಯದ ಕಪ್ಪು ನಿನ್ನ ಮೋರೆಗೆ ಹಚ್ಚಿಸಲೇನೋ । ಬಾಲ ಲಕುಮಿಲೋಲ ಪ್ರಸನ್ನವೆಂಕಟ ಕೃಷ್ಣ ॥ ೩ ॥
Lyrics in English
Yake kirikiri maduti neenyake Kiri maduti ||pa|| bhaktavatsala bhaya nivarana battalu barisaleno || a.pa ||
ನಿನ್ನ ಧ್ಯಾನದ ಶಕ್ತಿಯ ಕೊಡೊ ಅನ್ಯರಲಿ ವಿರಕ್ತಿಯ ಕೊಡೊ ನಿನ್ನ ನೋಡುವ ಯುಕ್ತಿಯ ಕೊಡೊ ನಿನ್ನ ಪಾಡುವ ಭಕ್ತಿಯ ಕೊಡೊ- ನಿನ್ನತ್ತೆ ಬರುವ ಸಂಪತ್ತಿಯ ಕೊಡೊ ಚಿತ್ತದಿ ತತ್ವದ ಕೃತ್ಯವ ತೋರೊ ಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊ ಅತ್ತತ್ತ ಮಾಡೊ ಭವ ಕತ್ತಲೆಯೆನಗೆ ಮುತ್ತಿದೆ ಹಯವದನ ||
Ninna dhyanada shaktiya kodo anyarali viraktiya kodo Ninna noduva yuktiya kodo Ninna paduva bhaktiyante kodo ninnati baruva sampattiya kodo chittadi tatwada krutyava toro matte tudiyali enage mukutiya kodo attatta mado Bhava kattaleyenage muttide hayavada ||
ಗಟ್ಟಿ ಗಂಟು ಹಾಕಿದ ಚಿತ್ರವು ಪರಮೇಷ್ಟಿ ರುದ್ರಾದ್ಯರ ಸ್ತೋತ್ರವು, ಮತ್ತೆ ಶಿಷ್ಟ ಜನರ ದಿವ್ಯ ಗಾನವು, ತಾನು ಅಷ್ಟು ಕೇಳುತ ಸಂತುಷ್ಟ ಮನಸಿನಿಂದ ಬೆಟ್ಟದೊಡೆಯ ಜಗಜಟ್ಟಿ ವೇಂಕಟ ರಮಣ || ೧ ||
ತುಂಬುರು ನಾರದರ ಗಾನವು, ದಿವ್ಯ ರಂಭೆ ಊರ್ವಶೀಯರ ನಾಟ್ಯವು ಅಲ್ಲಿ ತುಂಬಿದ ಸುರಮುನಿ ಕೂಟವು ಮಹಾಸಂಭ್ರಮ ಸಭೆಯಲ್ಲಿ ಕಂಬು ಕಂಧರನಿಗೆ ಅಂಬರ ವಾಣಿಯು ಜಯ ಜಯ ಜಯವೆನೆ ||೨||